ಬಾರದ ಊರಿಗೆ ಹೋದನಾತ
ಮರಳಿ ಬರುವನೇ ಬಾಳಜ್ಜ ?
ಎಲೆ-ಅಡಿಕೆಯ ಚೀಲ ಉಳಿದಿದೆ ಇಲ್ಲೇ
ಇನ್ನೂ ಯಾಕೆ ಬರಲಿಲ್ಲ ?
ನಗುತ ನಲಿಸುತ ಇಲ್ಲಿಯೇ ಇದ್ದ
ಈಗೂ ಇಲ್ಲಿಯೇ ಇರುವನೇನೋ ಎಂಬ ಭಾವ
ಬಾರನು ಮರಳಿ ಎಂದು ಗೊತ್ತಿದ್ದೂ
ಕೇಳುತಿಲ್ಲ ಮನಸು ಬಯಸುತಿದೆ ಅವನ, ಈ ಜೀವ
Friday, October 16, 2015
ಝುಮುಕಿ
ಅದೇನು ಹೇಳಲಿ
ನಿನ್ನ ಕಿವಿಯ ಝುಮುಕಿಯ
ತುಂಟಾಟವ
ಗಾಳಿಯ ನೆಪವೊಡ್ಡಿ
ನಿನ್ನ ಕೆನ್ನೆಯ ಚುಂಬಿಸುತ್ತಿದೆ ಪದೆ ಪದೆ
ನನ್ನ ಹೊಟ್ಟೆಯ ಉರಿಸಲೆಂದೇ..
ನಿನ್ನ ಕಿವಿಯ ಝುಮುಕಿಯ
ತುಂಟಾಟವ
ಗಾಳಿಯ ನೆಪವೊಡ್ಡಿ
ನಿನ್ನ ಕೆನ್ನೆಯ ಚುಂಬಿಸುತ್ತಿದೆ ಪದೆ ಪದೆ
ನನ್ನ ಹೊಟ್ಟೆಯ ಉರಿಸಲೆಂದೇ..
ಆಸೆ
ಮಾವಿನ ಕೊಂಬೆಯ ತುದಿಯ ಚಿಗುರು
ನಾನಾಗ ಬೇಕು ಓ ದೇವರೆ
ವಸಂತೆಯೊಡನೆ ಮಾತನಾಡಬೇಕಿದೆ
ಮುಂಜಾನೆ ಮುಸುಕುವ ಮಂಜಿನ ಹನಿಯು
ನಾನಾಗ ಬೇಕು ಓ ದೇವರೆ
ಎಲ್ಲ ಹೂಗಳನ್ನೂ ಚುಂಬಿಸಬೇಕಿದೆ
ಮೋಡದ ಮಡಿಲಿನ ನೀರಿನತೊಟ್ಟು
ನಾನಾಗ ಬೇಕು ಓ ದೇವರೆ
ಭೂಸಿರಿಯನ್ನು ತೊಯ್ಯಿಸ್ಸಿ ತಬ್ಬಬೇಕಿದೆ
ಕಪ್ಪೆಚಿಪ್ಪಲ್ಲಿ ಅಡಗಿದ ಹನಿಮುತ್ತು
ನಾನಾಗ ಬೇಕು ಓ ದೇವರೆ
ಅವಳ ಕೊರಳನ್ನು ಅಪ್ಪಬೇಕಿದೆ
ನಾನಾಗ ಬೇಕು ಓ ದೇವರೆ
ವಸಂತೆಯೊಡನೆ ಮಾತನಾಡಬೇಕಿದೆ
ಮುಂಜಾನೆ ಮುಸುಕುವ ಮಂಜಿನ ಹನಿಯು
ನಾನಾಗ ಬೇಕು ಓ ದೇವರೆ
ಎಲ್ಲ ಹೂಗಳನ್ನೂ ಚುಂಬಿಸಬೇಕಿದೆ
ಮೋಡದ ಮಡಿಲಿನ ನೀರಿನತೊಟ್ಟು
ನಾನಾಗ ಬೇಕು ಓ ದೇವರೆ
ಭೂಸಿರಿಯನ್ನು ತೊಯ್ಯಿಸ್ಸಿ ತಬ್ಬಬೇಕಿದೆ
ಕಪ್ಪೆಚಿಪ್ಪಲ್ಲಿ ಅಡಗಿದ ಹನಿಮುತ್ತು
ನಾನಾಗ ಬೇಕು ಓ ದೇವರೆ
ಅವಳ ಕೊರಳನ್ನು ಅಪ್ಪಬೇಕಿದೆ
ಹೀಗೇಕೆ
ತಾವು ಮಾಡಲಾಗದ
ಮಾಡಲು ಪ್ರಯತ್ನವೇ ಪಡದ ಆ ಕಾರ್ಯವ
ಧೃಡವಾದ ಛಲದೀ, ಅವಿರತ ಶ್ರಮದೀ ಸಾಧಿಸುವವನಿಗೆ
ಬೆನ್ನುಚಪ್ಪರಿಸಿ ಹುರಿದುಂಬಿಸುವ ಬದಲು
ಕೊಂಕು ಮಾತಾಡಿ ಕಾಲೇಳೆಯುವರಲ್ಲ
ಈ ಜನ ಹೀಗೇಕೆ ???
ಮಾಡಲು ಪ್ರಯತ್ನವೇ ಪಡದ ಆ ಕಾರ್ಯವ
ಧೃಡವಾದ ಛಲದೀ, ಅವಿರತ ಶ್ರಮದೀ ಸಾಧಿಸುವವನಿಗೆ
ಬೆನ್ನುಚಪ್ಪರಿಸಿ ಹುರಿದುಂಬಿಸುವ ಬದಲು
ಕೊಂಕು ಮಾತಾಡಿ ಕಾಲೇಳೆಯುವರಲ್ಲ
ಈ ಜನ ಹೀಗೇಕೆ ???
ಸುನಾಮಿ
ಸಾಗರದ ಅಲೆಗಳ ಏರಿಬಂದ
ಸಾವಿನ ಸರದಾರ
ಸಾವಿರ ಜನಗಳ ತುಂಬಿದ ಬದುಕಿಗೆ
ತಂದ ಸಂಚಕಾರ
ದೈತ್ಯ! ನಿನ್ನ ಅಟ್ಟಹಾಸಕ್ಕೆ ಸಿಕ್ಕಿ
ಕೊಚ್ಚಿದವೆಷ್ಟೋ ಆಸ್ತಿ-ಪಾಸ್ತಿ
ಸಿಗಲೇ ಇಲ್ಲ ಕೊನೆಗೂ
ಬಲಿಯಾದವರ ಅಸ್ತಿ
ಹೊಟ್ಟೆಯಕೂಸು ಕೈಬಿಟ್ಟುಹೋದ
ತಾಯಿಯ ದುಃಖದ ಕಂಬನ
ನೀ ಕೊಂದ ತಾಯಿಗಾಗಿ
ಆ ಕಂದನ ಹಂಬಲನ
ಬಂಧು-ಬಳಗ ಕಳೆದು ಕೊಂಡವರ
ಮುಗಿಲು ಮುಟ್ಟುವ ಆಕ್ರಂದನ
ಚುರ್ರೆನಿಸುವುದು ಕರುಳು
ತುಂಬಿಬರುವುದು ನಯನ
ಸುಂದರ ಬದುಕುಗಳ ಕೊಚ್ಚಿ
ಮಾಡಿದೇ ನೀ ಬೇನಾಮಿ
ಬರೀ ಅಲೆಯಲ್ಲ ಮೃತ್ಯುಬಲೆ
ಮಹಾಮಾರಿ ನೀ ಸುನಾಮಿ
ಸಾವಿನ ಸರದಾರ
ಸಾವಿರ ಜನಗಳ ತುಂಬಿದ ಬದುಕಿಗೆ
ತಂದ ಸಂಚಕಾರ
ದೈತ್ಯ! ನಿನ್ನ ಅಟ್ಟಹಾಸಕ್ಕೆ ಸಿಕ್ಕಿ
ಕೊಚ್ಚಿದವೆಷ್ಟೋ ಆಸ್ತಿ-ಪಾಸ್ತಿ
ಸಿಗಲೇ ಇಲ್ಲ ಕೊನೆಗೂ
ಬಲಿಯಾದವರ ಅಸ್ತಿ
ಹೊಟ್ಟೆಯಕೂಸು ಕೈಬಿಟ್ಟುಹೋದ
ತಾಯಿಯ ದುಃಖದ ಕಂಬನ
ನೀ ಕೊಂದ ತಾಯಿಗಾಗಿ
ಆ ಕಂದನ ಹಂಬಲನ
ಬಂಧು-ಬಳಗ ಕಳೆದು ಕೊಂಡವರ
ಮುಗಿಲು ಮುಟ್ಟುವ ಆಕ್ರಂದನ
ಚುರ್ರೆನಿಸುವುದು ಕರುಳು
ತುಂಬಿಬರುವುದು ನಯನ
ಸುಂದರ ಬದುಕುಗಳ ಕೊಚ್ಚಿ
ಮಾಡಿದೇ ನೀ ಬೇನಾಮಿ
ಬರೀ ಅಲೆಯಲ್ಲ ಮೃತ್ಯುಬಲೆ
ಮಹಾಮಾರಿ ನೀ ಸುನಾಮಿ
Thursday, October 15, 2015
ನೀನು
ನನ್ನ ಜೀವವೀಣೆಯ
ನಾದತಂತಿ ನೀನೆ
ನನ್ನ ಮನದ ರಾಗಕೆ
ತಾಳ ನೀನೆ
ನನ್ನ ಬಾಳ ಬೆಳದಿಂಗಳ
ತಿಂಗಳ ನೀನೆ
ಪ್ರೀತಿ ಬೆಳಕು ತೋರಿದ
ಕಂಗಳು ನೀನೆ
ನನ್ನ ಕವನಗಳಿಗೆಲ್ಲ
ನೀನೆ ಅಲ್ಲವೇ ಭಾಷೆ
ಸದಾ ನಿನ್ನ ತೋಳುಗಳಲಿ
ಉಳಿದು ಬಿಡುವಾಸೆ
ಬೇರೇನೂ ಬಯಸದೀ ಜೀವ
ನನ್ನಾಸೆಯ ಹೂವೇ
ಖುಷಿಯಿಂದ ತುಂಬಿರಲಿ ಸದಾ
ನಿನ್ನಯಾ ಬಾಳುವೆ
ನಾದತಂತಿ ನೀನೆ
ನನ್ನ ಮನದ ರಾಗಕೆ
ತಾಳ ನೀನೆ
ನನ್ನ ಬಾಳ ಬೆಳದಿಂಗಳ
ತಿಂಗಳ ನೀನೆ
ಪ್ರೀತಿ ಬೆಳಕು ತೋರಿದ
ಕಂಗಳು ನೀನೆ
ನನ್ನ ಕವನಗಳಿಗೆಲ್ಲ
ನೀನೆ ಅಲ್ಲವೇ ಭಾಷೆ
ಸದಾ ನಿನ್ನ ತೋಳುಗಳಲಿ
ಉಳಿದು ಬಿಡುವಾಸೆ
ಬೇರೇನೂ ಬಯಸದೀ ಜೀವ
ನನ್ನಾಸೆಯ ಹೂವೇ
ಖುಷಿಯಿಂದ ತುಂಬಿರಲಿ ಸದಾ
ನಿನ್ನಯಾ ಬಾಳುವೆ
ಅರಸಿ
ವರುಷ ನಾಲ್ಕಾದವು ಇಂದಿಗೆ
ನಾನವಳನ್ನು ವರಸಿ
ಅಂದಿಗು, ಇಂದಿಗು ಅವಳು
ನನ್ನೆದೆಯ ಅರಸಿ
ವರುಷ ನೂರಾಗಲಿ
ಹೀಗೆಯೆ ಇರಲಿ ಈ ಖುಷಿ
ಬೇಡುವೆವು ತಲೆಬಾಗಿ ದೇವತೆಗಳೆ
ನಮ್ಮನ್ನು ಹರಸಿ
Monday, October 12, 2015
ನೀನಿಲ್ಲದ ದಿನಗಳು
ನೀನಿಲ್ಲದ ದಿನಗಳು
ಅರೆಬೆಂದ ಅಗುಳುಗಳು
ನನ್ನನ್ನು ಕಾಡುತಿವೆ
ನಿದ್ರೆ ಇಲ್ಲದ ರಾತ್ರಿಗಳು
ಸಾಗರದ ಆ ತುದಿಯಲಿ
ಕುಳಿತಿರುವೆ ನೀನು
ಇಲ್ಲಿ ನಾನು
ನೀರಿಲ್ಲದ ಮೀನು..
ಅರೆಬೆಂದ ಅಗುಳುಗಳು
ನನ್ನನ್ನು ಕಾಡುತಿವೆ
ನಿದ್ರೆ ಇಲ್ಲದ ರಾತ್ರಿಗಳು
ಸಾಗರದ ಆ ತುದಿಯಲಿ
ಕುಳಿತಿರುವೆ ನೀನು
ಇಲ್ಲಿ ನಾನು
ನೀರಿಲ್ಲದ ಮೀನು..
ಸಾವು
ಜನ ಹೇಳುತ್ತಿದ್ದಾರೆ
ನಿನ್ನ ಕೊರಗಲೇ ನಾನು ಸತ್ತೆ! ಎಂದು
ಇವರಿಗೇಕೆ ಅರ್ಥವಾಗುವುದಿಲ್ಲ
ನಾನು ಇನ್ನೂ ನಿನಗಾಗಿ ಕಾಯುವೆ ಎಂದು.
ಎಂದಿಲ್ಲದ ಇವತ್ತು ನನಗೆ ಸ್ನಾನ
ಹೊಸ ಉಡುಗೆ, ಶೃಂಗಾರ
ಹೂಮಾಲೆಗಳ ರಾಶಿ ಬೇರೆ!
ಎಲ್ಲರೂ ಸೇರಿದ್ದಾರೆ ಇಲ್ಲೇ
ಪೊರೆದವರು, ಹಳಿದವರು.
ಇನ್ನುಮುಂದೆ ಇದೇ ನನ್ನ ಜಾಗ
ಮೂರಡಿ, ಆರಡಿ, ಊರಹೊರಗೆ
ಇದೇಸರಿ! ಇಲ್ಲಿ ಯಾರದೂ ಕಾಟವಿಲ್ಲ
ನಾನು ಮತ್ತು ನಿನ್ನ ನೆನಪು ಮಾತ್ರ.
ಕಾದು ಕಾದು ಹಣ್ಣಾಯಿತು
ಅದಕ್ಕೆ ಮಣ್ಣಾಯಿತು ದೇಹ
ಜೀವವಿಲ್ಲದಿರೇನಾಯಿತು
ಇನ್ನೂ ಕಾಯುತಿದೆ ಹೃದಯ,
ನಿನಗಾಗಿ ಇನ್ನೂ ಕಾಯುತಿದೆ ಹೃದಯ.
ನಿನ್ನ ಕೊರಗಲೇ ನಾನು ಸತ್ತೆ! ಎಂದು
ಇವರಿಗೇಕೆ ಅರ್ಥವಾಗುವುದಿಲ್ಲ
ನಾನು ಇನ್ನೂ ನಿನಗಾಗಿ ಕಾಯುವೆ ಎಂದು.
ಎಂದಿಲ್ಲದ ಇವತ್ತು ನನಗೆ ಸ್ನಾನ
ಹೊಸ ಉಡುಗೆ, ಶೃಂಗಾರ
ಹೂಮಾಲೆಗಳ ರಾಶಿ ಬೇರೆ!
ಎಲ್ಲರೂ ಸೇರಿದ್ದಾರೆ ಇಲ್ಲೇ
ಪೊರೆದವರು, ಹಳಿದವರು.
ಇನ್ನುಮುಂದೆ ಇದೇ ನನ್ನ ಜಾಗ
ಮೂರಡಿ, ಆರಡಿ, ಊರಹೊರಗೆ
ಇದೇಸರಿ! ಇಲ್ಲಿ ಯಾರದೂ ಕಾಟವಿಲ್ಲ
ನಾನು ಮತ್ತು ನಿನ್ನ ನೆನಪು ಮಾತ್ರ.
ಕಾದು ಕಾದು ಹಣ್ಣಾಯಿತು
ಅದಕ್ಕೆ ಮಣ್ಣಾಯಿತು ದೇಹ
ಜೀವವಿಲ್ಲದಿರೇನಾಯಿತು
ಇನ್ನೂ ಕಾಯುತಿದೆ ಹೃದಯ,
ನಿನಗಾಗಿ ಇನ್ನೂ ಕಾಯುತಿದೆ ಹೃದಯ.
ನೆನಪು
ನೆನಪು
ಮಳೆ ಬಂದು ನಿಂತಾಗ
ನನ್ನೆದೆಯು ತೊಯ್ದಾಗ
ತಂಗಾಳಿ ಬೀಸಿ ಬಂತು
ಮುಚ್ಚಿ ಮಲಗಿದ್ದ ಭಾವನೆ
ಗರಿಗೆದರಿ ನಿಂತು
ನಿನ್ನಯ ನೆನಪನು ಹೊತ್ತು ತಂತು
ಮೈ ನಡುಕವಿದ್ದರೂ
ಮನ ಮಾತ್ರ ಬೆಚ್ಚಗಿತ್ತು
ಅದರುತಿದ್ದರು ಅಧರ
ತಿಳಿನಗೆಯ ಬೀರಿತ್ತು
ಮೊದಲ ಸ್ಪರ್ಶದ ಆ ನೆನಪು
ಮನದಲಿ ಪುಳಕ ತಂತು
ರಂಗೇರಿದ ಸಂಜೆಯಲಿ
ಕಣ್ಣಿಗೆ ಮಂಜು ಕವಿದಿತ್ತು
ಮೈತನ್ನ ಇರುವನ್ನೆ ಮರೆತಿತ್ತು
ಕಿವಿಯಲಿ ನಿನ್ನದೇ ದನಿಯ ಗುಂಜನವಿತ್ತು
ತಂಗಾಳಿ ನಿನ್ನಯ ನೆನಪನು
ಹೊತ್ತು ತಂತು
ನನ್ನಲಿ ಹೊಸ ಹುರುಪು
ಉಕ್ಕಿ ಬಂತು
ಮಳೆ ಬಂದು ನಿಂತಾಗ
ನನ್ನೆದೆಯು ತೊಯ್ದಾಗ
ತಂಗಾಳಿ ಬೀಸಿ ಬಂತು
ಮುಚ್ಚಿ ಮಲಗಿದ್ದ ಭಾವನೆ
ಗರಿಗೆದರಿ ನಿಂತು
ನಿನ್ನಯ ನೆನಪನು ಹೊತ್ತು ತಂತು
ಮೈ ನಡುಕವಿದ್ದರೂ
ಮನ ಮಾತ್ರ ಬೆಚ್ಚಗಿತ್ತು
ಅದರುತಿದ್ದರು ಅಧರ
ತಿಳಿನಗೆಯ ಬೀರಿತ್ತು
ಮೊದಲ ಸ್ಪರ್ಶದ ಆ ನೆನಪು
ಮನದಲಿ ಪುಳಕ ತಂತು
ರಂಗೇರಿದ ಸಂಜೆಯಲಿ
ಕಣ್ಣಿಗೆ ಮಂಜು ಕವಿದಿತ್ತು
ಮೈತನ್ನ ಇರುವನ್ನೆ ಮರೆತಿತ್ತು
ಕಿವಿಯಲಿ ನಿನ್ನದೇ ದನಿಯ ಗುಂಜನವಿತ್ತು
ತಂಗಾಳಿ ನಿನ್ನಯ ನೆನಪನು
ಹೊತ್ತು ತಂತು
ನನ್ನಲಿ ಹೊಸ ಹುರುಪು
ಉಕ್ಕಿ ಬಂತು
Saturday, October 10, 2015
ಇವನು
ಇವನು
ಅದೆಷ್ಟು ಹುಡುಕಿದರೂ ಸಿಗುತ್ತಿಲ್ಲ ಕುರುಹು
ಎಷ್ಟು ಆಳಕ್ಕಿಳಿದರೂ ಬರೀ ಗೊಜಲು ಗೊಜಲು
ತಲೆ ಬುಡ ಏನೂ ತಿಳಿಯದು
ಇಷ್ಟು ವರುಷಗಳು ಕಳೆದರೂ ಜೊತೆಯಲಿ, ಅರ್ಥವಾಗುತ್ತಿಲ್ಲ ಇವನು.
ಒಮ್ಮೊಮ್ಮೆ ಅದೇನೋ ಹುಮ್ಮಸ್ಸು, ಅದೇನೋ ಉತ್ಸಾಹ, ಲವಲವಿಕೆ
ಮತ್ತೊಮ್ಮೆ ಅದೇ ಆದ್ರತೆ, ಬೇಸರಿಕೆ, ಜಿಗುಪ್ಸೆ
ಮೂಲೆಯಲಿ ಚಿಗುರೊಡೆದು ಮನದ ತುಂಬ ಹಬ್ಬುವ ಆಸೆಗಳು,
ಏನೇನೋ ಕನಸುಗಳು, ವಾಸ್ತವದ ಜೊತೆಗೆ ಕಾದುವ, ಸೋಲುವ, ಗೆಲ್ಲುವ, ಗೆದ್ದೂ ಸೋಲುವ ಬಯಕೆಗಳು.
ಹುಚ್ಚು ಕುದುರೆಯ ಮೇಲೇಯೇ ಸವಾರಿ
ಪ್ರತಿ ಹೆಜ್ಜೆಗೂ ನೂರಾರು ಹೊಸ ದಾರಿ
ಯಾವುದು ತಪ್ಪು, ಯಾವುದು ಸರಿ
ಅಷ್ಟಕ್ಕೂ ಸಾಧುವೆ ಇವನ ಗುರಿ?
ಸದಾ ಮುಂದಿನದ್ದೇ ಚಿಂತೆ, ಋಣಗಣದ್ದೇ ಕಾರು-ಬಾರು
ನಡು ನಡುವೆ ಧನಶೇಷದ ಮಿಣುಕು, ಸ್ಫೂರ್ತಿ, ಆಸರೆ
ಒಮ್ಮೆಲೆ ಆವರಿಸುವ ವ್ಯಾಮೋಹ, ಕರಿಮೋಡದಂತೆ
ಕೆಲವೊಮ್ಮೆ ನಿರಾಳ, ಗಾಳಿಯಲಿ ತೇಲುವ ಅರಳೆಯಂತೆ
ಏರೇ ಬಿಡುವನೊಮ್ಮೆ ಹೆಮ್ಮೆಯ ಮೇರು ಗಿರಿ
ಕಾಲೆಳೆದಾಗ ಹಳ-ಹಳಿಯ ಪ್ರಪಾತ.
ನಿರಾಸೆಯ ಕಾಲುವೆಯಲಿ ಮೊಣಕಾಲಷ್ಟು ನೀರಿದ್ದರೂ ದಾಟಲಂತು ಸಾಕು-ಸಾಕು
ಮುಂದೆ ಮಗಧಾದ ಹೊಳೆಯೇ ಇದೆ ಈಸಿ ದಡವ ಸೇರಬೇಕು
ನಂಬ ಬಹುದೇ ಇವನ? ಇವನ ಸಾಮರ್ಥ್ಯವ?
ಅರಿಯ ಬಲ್ಲೆನೇ ನಾನು ಎಂದಾದರು ಇವನ ಆಳ-ವಿಸ್ತಾರವ
ಗೊತ್ತಿಲ್ಲ ಎಷ್ಟುದಿನ ಈ ಪ್ರಯತ್ನ, ಬಹುಶಃ ನನ್ನ ಕೊನೆಯವರಿಗೆ
ಅಥವಾ ಇವನು ಜೊತೆ ಇರುವರೆಗೆ...
ಅದೆಷ್ಟು ಹುಡುಕಿದರೂ ಸಿಗುತ್ತಿಲ್ಲ ಕುರುಹು
ಎಷ್ಟು ಆಳಕ್ಕಿಳಿದರೂ ಬರೀ ಗೊಜಲು ಗೊಜಲು
ತಲೆ ಬುಡ ಏನೂ ತಿಳಿಯದು
ಇಷ್ಟು ವರುಷಗಳು ಕಳೆದರೂ ಜೊತೆಯಲಿ, ಅರ್ಥವಾಗುತ್ತಿಲ್ಲ ಇವನು.
ಒಮ್ಮೊಮ್ಮೆ ಅದೇನೋ ಹುಮ್ಮಸ್ಸು, ಅದೇನೋ ಉತ್ಸಾಹ, ಲವಲವಿಕೆ
ಮತ್ತೊಮ್ಮೆ ಅದೇ ಆದ್ರತೆ, ಬೇಸರಿಕೆ, ಜಿಗುಪ್ಸೆ
ಮೂಲೆಯಲಿ ಚಿಗುರೊಡೆದು ಮನದ ತುಂಬ ಹಬ್ಬುವ ಆಸೆಗಳು,
ಏನೇನೋ ಕನಸುಗಳು, ವಾಸ್ತವದ ಜೊತೆಗೆ ಕಾದುವ, ಸೋಲುವ, ಗೆಲ್ಲುವ, ಗೆದ್ದೂ ಸೋಲುವ ಬಯಕೆಗಳು.
ಹುಚ್ಚು ಕುದುರೆಯ ಮೇಲೇಯೇ ಸವಾರಿ
ಪ್ರತಿ ಹೆಜ್ಜೆಗೂ ನೂರಾರು ಹೊಸ ದಾರಿ
ಯಾವುದು ತಪ್ಪು, ಯಾವುದು ಸರಿ
ಅಷ್ಟಕ್ಕೂ ಸಾಧುವೆ ಇವನ ಗುರಿ?
ಸದಾ ಮುಂದಿನದ್ದೇ ಚಿಂತೆ, ಋಣಗಣದ್ದೇ ಕಾರು-ಬಾರು
ನಡು ನಡುವೆ ಧನಶೇಷದ ಮಿಣುಕು, ಸ್ಫೂರ್ತಿ, ಆಸರೆ
ಒಮ್ಮೆಲೆ ಆವರಿಸುವ ವ್ಯಾಮೋಹ, ಕರಿಮೋಡದಂತೆ
ಕೆಲವೊಮ್ಮೆ ನಿರಾಳ, ಗಾಳಿಯಲಿ ತೇಲುವ ಅರಳೆಯಂತೆ
ಏರೇ ಬಿಡುವನೊಮ್ಮೆ ಹೆಮ್ಮೆಯ ಮೇರು ಗಿರಿ
ಕಾಲೆಳೆದಾಗ ಹಳ-ಹಳಿಯ ಪ್ರಪಾತ.
ನಿರಾಸೆಯ ಕಾಲುವೆಯಲಿ ಮೊಣಕಾಲಷ್ಟು ನೀರಿದ್ದರೂ ದಾಟಲಂತು ಸಾಕು-ಸಾಕು
ಮುಂದೆ ಮಗಧಾದ ಹೊಳೆಯೇ ಇದೆ ಈಸಿ ದಡವ ಸೇರಬೇಕು
ನಂಬ ಬಹುದೇ ಇವನ? ಇವನ ಸಾಮರ್ಥ್ಯವ?
ಅರಿಯ ಬಲ್ಲೆನೇ ನಾನು ಎಂದಾದರು ಇವನ ಆಳ-ವಿಸ್ತಾರವ
ಗೊತ್ತಿಲ್ಲ ಎಷ್ಟುದಿನ ಈ ಪ್ರಯತ್ನ, ಬಹುಶಃ ನನ್ನ ಕೊನೆಯವರಿಗೆ
ಅಥವಾ ಇವನು ಜೊತೆ ಇರುವರೆಗೆ...
Subscribe to:
Posts (Atom)